ಬಿಜೆಪಿಗೆ ಸ್ವಚ್ಛ ಆಡಳಿತ ನೀಡುವ ಉದ್ದೇಶವಿಲ್ಲ: ರಾಜ್ಯಪಾಲರ ವಾಗ್ದಾಳಿ
[Updated 13/07/2012 11:14 pm]ಬೆಂಗಳೂರು, ಜು,13: ರಾಜ್ಯದಲ್ಲಿ ಸ್ವಚ್ಛ ಆಡಳಿತ ನೀಡುವ ಯಾವುದೇ ಉದ್ದೇಶವನ್ನು ಬಿಜೆಪಿ ಸರಕಾರ ಹೊಂದಿಲ್ಲ ಎಂದು ಹೇಳಿರುವ ರಾಜ್ಯಪಾಲ ಎಚ್.ಆರ್. ಭಾರದ್ವಾಜ್, ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸಂಪುಟದಲ್ಲಿ ಈಗಲೂ ಕಳಂಕಿತರಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸದಾನಂದಗೌಡರ ಆಡಳಿತಾವಧಿಯಲ್ಲಿ ಮೌನ ವಹಿಸಿದ್ದ ರಾಜ್ಯಪಾಲರು, ಶೆಟ್ಟರ್ ಮುಖ್ಯಮಂತ್ರಿಯಾಗುತ್ತಿದ್ದಂತೆ ತಮ್ಮ ಟೀಕಾಪ್ರಹಾರ ಮುಂದುವರೆಸುವ ಸುಳಿವು ನೀಡಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಳಿತವನ್ನು ಸ್ವಚ್ಚಗೊಳಿಸುವ ಯಾವುದೇ ಉದ್ದೇಶವನ್ನು ಸರಕಾರ ಹೊಂದಿಲ್ಲ. ದುರಂತವೆಂದರೆ ಸಂಪುಟದಲ್ಲಿನ ಕೆಲವರು ಕಳಂಕಿತರಾಗಿದ್ದಾರೆ. ನ್ಯಾಯಾಲಯದ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.
ಕಳಂಕಿತ ಸಚಿವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವುದು ಬೇಡ ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಸಲಹೆ ನೀಡಿದ್ದ ರಾಜ್ಯಪಾಲರು, ತಮ್ಮ ಸಲಹೆಯನ್ನು ಗಂಭೀರವಾಗಿ ಪರಿಗಣಿಸದೇ ಇರುವ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನಗೊಂಡಿದ್ದಾರೆ. ಇದನ್ನು ತಮ್ಮ ಮಾತುಗಳ ಮೂಲಕ ಹೊರ ಹಾಕಿದ್ದಾರೆ. ಕಳಂಕಿತರು ಸಂಪುಟದಲ್ಲಿರುವುದನ್ನು ಈ ನಾಡಿನ ಜನ ಬಯಸುವುದಿಲ್ಲ. ಈ ಸಂಬಂಧ ತಾವು ಯಾವಾಗಲೂ ಸಲಹೆ, ಸೂಚನೆ, ಮಾರ್ಗದರ್ಶನ ನೀಡುತ್ತಲೇ ಇರುತ್ತೇನೆ. ಆದರೆ ಆಡಳಿತದಲ್ಲಿರುವವರು ಇದನ್ನು ಅರ್ಥಮಾಡಿಕೊಳ್ಳಬೇಕು. ಪ್ರಜಾತಂತ್ರ ವ್ಯವಸ್ಧೆಯಲ್ಲಿ ಮುಖ್ಯಮಂತ್ರಿ ಕಳುಹಿಸುವ ಸಚಿವರ ಪಟ್ಟಿಗೆ ಅಂತಿಮವಾಗಿ ತಾವು ಅನುಮೋದನೆ ನೀಡಲೇಬೇಕಾಗುತ್ತದೆ. ಅದರಂತೆ ಶೆಟ್ಟರ್ ಸೇರಿದಂತೆ ಒಟ್ಟು 34 ಮಂದಿಗೆ ಪ್ರತಿಜ್ಞಾವಿಧಿ ಬೋಧಿಸಬೇಕಾಯಿತು ಎಂದು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡರು.
ನ್ಯಾಯಾಲಯದ ಪ್ರಕರಣಗಳನ್ನು ಎದುರಿಸುತ್ತಿರುವ ಕೆಲವರನ್ನು ಪಟ್ಟಿಯಿಂದ ಕೈಬಿಡುವಂತೆ ಸಲಹೆ ನೀಡಿದ್ದೆ. ಈ ಬಗ್ಗೆ ಪರಿಶೀಲಿಸುವುದಾಗಿ ಬಿಜೆಪಿ ನಾಯಕರು ಭರವಸೆ ನೀಡಿದ್ದರು. ಆದರೆ ನಂತರ ಈ ಪಟ್ಟಿಗೆ ಬಿಜೆಪಿ ಹೈಕಮಾಂಡ್ ಅನುಮೋದನೆ ನೀಡಿದೆ. ಅವರ ಸೂಚನೆಯಂತೆ ಪಟ್ಟಿಯನ್ನು ರವಾನಿಸಿರುವುದಾಗಿ ಹೇಳಿದ್ದಾರೆ ಎಂದು ಬಿಜೆಪಿ ವರಿಷ್ಠರ ಮೇಲೂ ಪರೋಕ್ಷವಾಗಿ ಟೀಕಾ ಪ್ರಹಾರ ನಡೆಸಿದರು.
ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ವಿರುದ್ಧ ದಾಖಲಾಗಿರುವ ಕಾನೂನು ಬಾಹಿರ ಡಿನೋಟಿಪಿಕೇಶನ್ ಕುರಿತ ಪ್ರಕರಣದ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಯಿಸಿದ ರಾಜ್ಯಪಾಲರು, ಶೆಟ್ಟರ್ ವಕೀಲರಾಗಿದ್ದಾರೆ. ಜನ ಸಾಮಾನ್ಯರು ಮಾತನಾಡುವಂತೆ ಶೆಟ್ಟರ್ ಅವರ ವಿರುದ್ದ ಯಾವುದೇ ಆರೋಪಗಳಿಲ್ಲ. ಈ ಬಗ್ಗೆ ತಾವು ಹೆಚ್ಚಿಗೆ ಮಾತನಾಡಲು ಇಚ್ಚಿಸುವುದಿಲ್ಲ ಎಂದರು.
ರಾಜ್ಯ ಬಿಜೆಪಿ ಸರಕಾರ ಸ್ಧಿರ ಆಡಳಿತ ನೀಡುವ ವಿಶ್ವಾಸವಿದೆ. ಆದರೆ ಸದಾನಂದಗೌಡರಿಗೆ ರಾಜೀನಾಮೆ ನೀಡುವಂತೆ ಸೂಚಿಸಿದಾಗ ತಮಗೆ ಅಸಮಾಧಾನವಾಯಿತು ಎಂದರು. ಜಗದೀಶ್ ಶೆಟ್ಟರ್ ಯಾವ ರೀತಿಯ ಆಡಳಿತ ನಡೆಸಲಿದ್ದಾರೆ ಎಂದು ಈಗಲೇ ಹೇಳುವುದು ಅಪ್ರಸ್ತುತವಾಗುತ್ತದೆ. ಆದರೆ ಅವರು ಉತ್ತಮ ಆಡಳಿತ ನೀಡುವ ವಿಶ್ವಾಸವಿದೆ ಎಂದು ಪ್ರಶ್ನೆಯೊಂದಕ್ಕೆ ಚುಟುಕಾಗಿ ಉತ್ತರಿಸಿದರು.
ಸದಾನಂದಗೌಡರ 11 ತಿಂಗಳ ಆಡಳಿತದ ಬಗ್ಗೆ ತಮಗೆ ತೃಪ್ತಿಯಿದೆ. ಕಡಿಮೆ ಅವಧಿಯಲ್ಲಿ ಉತ್ತಮ ಆಡಳಿತ ನೀಡಿದರು. ಗುರುವಾರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ನೂತನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸದಾನಂದಗೌಡರ ಉತ್ತಮ ಕೆಲಸವನ್ನು ಮುಂದುವರೆಸಿಕೊಂಡು ಹೋಗುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಲೋಕಾಯುಕ್ತ ನೇಮಕಾತಿ ವಿಳಂಬವಾಗಿರುವ ಕುರಿತ ವಿವಾದದ ಬಗ್ಗೆ ಪ್ರತಿಕ್ರಯಿಸಿದ ಅವರು, ಆಡಳಿತಾರೂಢ ಬಿಜೆಪಿ ಜನರ ಅಭಿಪ್ರಾಯಗಳಿಗೆ ಗೌರವ ನೀಡುತ್ತಿಲ್ಲ. ಮತ್ತೆ ಮತ್ತೆ ತಪ್ಪುಗಳನ್ನು ಮಾಡುತ್ತಿದೆ. ಅಂತಿಮವಾಗಿ ತೀರ್ಮಾನ ಕೈಗೊಳ್ಳುವ ಅಧಿಕಾರ ಜನರಿಗೆ ಇದ್ದೇ ಇದೆ ಎಂದು ಹೇಳಿದರು.
ನೂತನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಲೋಕಾಯುಕ್ತರನ್ನು ನೇಮಿಸುವ ಅಧಿಕಾರವಿದೆ. ಇದನ್ನು ಬಳಸಿಕೊಂಡು ಕೂಡಲೇ ನೇಮಕಾತಿ ಕಾರ್ಯ ಪೂರ್ಣಗೊಳಿಸಬೇಕು. ತಮಗೆ ಎಲ್ಲಾ ಸಂವಿಧಾನಿಕ ಸಂಸ್ಧೆಗಳು ಕಾರ್ಯನಿರ್ವಹಿಸುವಂತಾಗಬೇಕು. ಲೋಕಾಯುಕ್ತ ನೇಮಕಾತಿಗಾಗಿ ಸಾಕಷ್ಟು ಅರ್ಹರಿದ್ದಾರೆ. ಆದರೆ ಈ ವಿಚಾರದಲ್ಲಿ ಜಾತಿಯನ್ನು ಮಾನದಂಡವನ್ನಾಗಿ ಪರಿಗಣಿಸಬಾರದು. ಜಾತಿ ಆಧಾರಿತ ನೇಮಕಾತಿಯನ್ನು ತಾವು ಒಪ್ಪುವುದಿಲ್ಲ ಎಂದರು.
ಸದಾನಂದಗೌಡರು ಬರ ಸೇರಿದಂತೆ ಆಡಳಿತವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪ್ರಯತ್ನ ನಡೆಸುತ್ತಿದ್ದ ಸಂದರ್ಭದಲ್ಲಿ ಅವರ ಬದಲಾವಣೆಯಾಯಿತು. ಆದರೆ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಭೀಕರ ಬರಗಾಲವಿದೆ. ಹೀಗಿರುವಾಗ ಪರಿಸ್ಧಿತಿಯನ್ನು ನಿಭಾಯಿಸುವುದು ಸರಕಾರಕ್ಕೆ ಬಿಟ್ಟ ವಿಚಾರ ಎಂದರು.
BJP has no interest in providing clean admn: Governor
Bangalore:State Governor HR Bharadwaj has launched a tirade against the state government led by Jagadish Shettar stating that the cabinet has tainted ministers and that the government was not interested in providing a clean administration.
ಮೊಬೈಲ್ ಬಿಲ್ ಪಾವತಿಯಾಗದ ಹಿನ್ನೆಲೆಯಲ್ಲಿ 108 ಸೇವೆ ಸ್ಥಗಿತ
ಬೆಂಗಳೂರು: ಜಿವಿಕೆ ಸಂಸ್ಥೆ ಏರ್ ಟೆಲ್ ನ ಮೊಬೈಲ್ ಬಿಲ್ ಪಾವತಿಸದಿರುವ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿಯಿಂದ 108 ಆ್ಯಂಬುಲೆನ್ಸ್ ಸೇವೆ ಸಂಪೂರ್ಣ ಸ್ಥಗಿತಗೊಂಡಿದೆ.
ಮೈತ್ರಿ ಮುರಿದುಕೊಂಡ ಎರಡೇ ದಿನದಲ್ಲಿ ಬಿಜೆಪಿ-ಜೆಡಿಯು ಹೊಡೆದಾಟ
ಪಟ್ನಾ: ಎನ್ ಡಿಎ ಮೈತ್ರಿಕೂಟದಿಂದ ಹೊರನಡೆದ ಜೆಡಿಯು ಮಾಡಿರುವ ವಿಶ್ವಾಸಘಾತಕ್ಕೆ ಮಂಗಳವಾರ ಬಿಹಾರ್ ಬಂದ್ ಗೆ ಕರೆ ನೀಡಿರುವ ಬಿಜೆಪಿ ಮತ್ತು ಜೆಡಿಯು ಕಾರ್ಯಕರ್ತರ ಮಧ್ಯೆ ಮಾರಾಮಾರಿ ನಡೆದಿದೆ.
ಡಿಎಸ್ ಪಿ ಕಾರು ಅವಘಡಕ್ಕೆ ಪಾದಚಾರಿಗಳ ಸಹಿತ ಐವರು ಬಲಿ
ಪುಣೆ: ಸೋಮವಾರ ಸಂಜೆ ಉಪ ಪೊಲೀಸ್ ಆಯುಕ್ತರೊಬ್ಬರು ತನ್ನ ಕಾರಿನ ನಿಯಂತ್ರಣ ಕಳಕೊಂಡು ಪಾದಚಾರಿಗಳಿಗೆ ಡಿಕ್ಕಿ ಹೊಡೆದಿದ್ದು, ಈ ದುರ್ಘಟನೆಯಲ್ಲಿ ಐದು ಮಂದಿ ಸಾವನ್ನಪ್ಪಿದ್ದಾರೆ.
ಸಾಮಾಜಿಕ ತಾಣಗಳಲ್ಲಿ ವಿಚ್ಛೇದನ ವಿರೋಧಿಸಿ ಪ್ರತಿಭಟನೆ
ಮುಂಬಯಿ: ಸ್ಕೈಪೆ ಮತ್ತು ಫೇಸ್ ಬುಕ್ ನಂತಹ ಮಾಧ್ಯಮಗಳನ್ನು ಉಪಯೋಗಿಸಿಕೊಂಡು ತಲಾಕ್ ನೀಡುತ್ತಿರುವಂತಹ ಬೆಳವಣಿಗಳು ನಡೆಯುತ್ತಿರುವುದನ್ನು ವಿರೋಧಿಸಿ ಭಾರತೀಯ ಮುಸ್ಲಿಂ ಮಹಿಳಾ ಅಂದೋಲನ್(ಬಿಎಂಎಂಎ)
ಕೊಡಗಿನ ಮಳೆಗಾಲದ ಸುಂದರಿ ಡೇಲಿಯಾ
ಮುಂಗಾರು ಮಳೆ ಸುರಿದಾಗ ಮನೆಮುಂದಿನ ಹೂತೋಟದಲ್ಲಿ ಸುಪ್ತವಾಗಿದ್ದ ಡೆಲೀಯಾ ಗೆಡ್ಡೆಗಳು ಮೊಳಕೆಯೊಡೆದು ಗಿಡಗಳಾಗಿ ವಿವಿಧ ಆಕಾರ, ಬಣ್ಣಗಳಲ್ಲಿ ಗೊಂಚಲುಗೊಂಚಲಾಗಿ ಹೂಬಿಟ್ಟು ಕಂಗೊಳಿಸುತ್ತವೆ.
ಮೈಸೂರಿನಲ್ಲಿ ಅಖಿಲೇಶ್ ಕಳೆದ ಮಧುರ ಕ್ಷಣಗಳು...
ಮೈಸೂರು: ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮೈಸೂರಿನ ಜೆಸಿಇ ಕ್ಯಾಂಪಸ್ಸಿಗೆ ಬರುವ ಮುನ್ನ ಅವರ ಶಿಕ್ಷಕರು ಮತ್ತು ಸ್ನೇಹಿತರನ್ನು ಮಾತಿಗೆಳೆದಾಗ ಅವತ್ತಿನ ಆ ಮಧುರ ಕ್ಷಣಗಳನ್ನು ನೆನಪು ಮಾಡಿಕೊಂಡ ಪರಿ ಇಲ್ಲಿದೆ.

Write Your Comment Here...