ಕೊಡಗಿಗೆ ವಲಸೆ ಬಂದ ನೈಜಿರಿಯಾದ ಅತಿಥಿಗಳು....
[Updated 30/07/2012 09:48 am ][Author: ]ಬಿ.ಎಂ.ಲವಕುಮಾರ್
ಕೊಡಗಿಗೆ ನೈಜಿರಿಯಾದ ಅತಿಥಿಗಳು ಬಂದಿದ್ದಾರೆ. ಈಗ ಏನಿದ್ದರೂ ಅವರದೇ ದರ್ಭಾರ್... ತೋಟ, ಗದ್ದೆ ಹೀಗೆ ಎಲ್ಲೆಂದರಲ್ಲಿ ಓಡಾಡುತ್ತಾ ಸಂಭ್ರಮಿಸುತ್ತಿದ್ದಾರೆ. ಹಾಗೆಂದು ಇವರೇನು ಕೊಡಗಿಗೆ ಹೊಸಬರಲ್ಲ. ಕಳೆದ ಹಲವು ದಶಕಗಳಿಂದ ಮಳೆಗಾಲದ ಅತಿಥಿಗಳಾಗಿ ಬರುತ್ತಲೇ ಇದ್ದಾರೆ. ಮುಂದೆಯೂ ಬರುತ್ತಾರೆ. ಇವರ್ಯಾರಪ್ಪಾ ನೈಜಿರಿಯಾದ ಅತಿಥಿಗಳು? ಎಂಬ ಕುತೂಹಲ ನಿಮ್ಮಲ್ಲಿ ಮೂಡಿರಬಹುದಲ್ಲವೆ? ಹಾಗಾದರೆ ಕೊಡಗಿನ ಮೂರ್ನಾಡು, ನಾಪೋಕ್ಲು, ವೀರಾಜಪೇಟೆಗೆ ಬನ್ನಿ ಇಲ್ಲಿನ ಹೆಮ್ಮರಗಳಲ್ಲಿ ಅತ್ತಿಂದ ಇತ್ತ ಹಾರುತ್ತಾ ಚಿಲಿಪಿಲಿ ಗುಟ್ಟುತ್ತಾ ಸ್ವಾಗತಿಸುವ ಈ ಅತಿಥಿಗಳನ್ನು ನೋಡಿದ ಮೇಲೆ ನೈಜಿರಿಯಾದ ಅತಿಥಿಗಳು ಅಂದ್ರೆ ಬೆಳ್ಳಕ್ಕಿಗಳಾ ಎಂದು ಅಚ್ಚರಿಪಡುವುದರಲ್ಲಿ ಸಂಶಯವಿಲ್ಲ.
ಹಾಗೆ ನೋಡಿದರೆ ಕೊಡಗಿನಲ್ಲಿ ಮಳೆಗಾಲ ಪ್ರಾರಂಭವಾಗುತ್ತಿದ್ದಂತೆಯೇ ಮಳೆ, ಗಾಳಿಯನ್ನು ಸಹಿಸದ ಕೆಲವು ಹಕ್ಕಿಗಳು ದೂರದ ಸುರಕ್ಷಿತ ತಾಣವನ್ನು ಅರಸುತ್ತಾ ವಲಸೆ ಹೋಗುವುದು ಹಿಂದಿನಿಂದಲೂ ನಡೆದು ಬಂದ ಪ್ರಕೃತಿ ನಿಯಮ. ಆದರೆ ಕಳೆದ ಕೆಲವು ವರ್ಷಗಳಿಂದ ಸ್ವಲ್ಪ ಬದಲಾವಣೆ ಕಂಡು ಬರುತ್ತಿದೆ. ಇಲ್ಲಿ ಮೊದಲಿನಂತೆ ಮಳೆ ಬರುತ್ತಿಲ್ಲ ಹೀಗಾಗಿ ಕೆಲವು ಹಕ್ಕಿಗಳು ಇಲ್ಲಿಯೇ ಉಳಿಯುತ್ತಿವೆ. ಇದೆಲ್ಲಕ್ಕಿಂತ ವಿಶೇಷವೆನೆಂದರೆ ಪ್ರತಿವರ್ಷವೂ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಇಲ್ಲಿಗೆ ಬೆಳ್ಳಕ್ಕಿಗಳು ಅತಿಥಿಗಳಾಗಿ ಬರುತ್ತಿವೆ. ಹೀಗೆ ಬರುವ ಬೆಳ್ಳಕ್ಕಿಗಳು ಎಲ್ಲೆಂದರಲ್ಲಿ ಬೀಡು ಬಿಡದೆ ಸುರಕ್ಷಿತ ಸ್ಥಳವನ್ನು ಆಯ್ದು ಹೆಮ್ಮರಗಳ ಮೇಲೆ ಗೂಡು ಕಟ್ಟಿ ಮರಿ ಮಾಡಿ ತಮ್ಮ ಸಂತಾನೋತ್ಪತ್ತಿ ಮಾಡಿಕೊಂಡು ಹಿಂತಿರುಗುತ್ತಿವೆ.






ಕೊಡಗಿಗೆ ಬರುವ ಬೆಳ್ಳಕ್ಕಿಗಳಿಗೆ ಪ್ರತಿ ವರ್ಷವೂ ಆಶ್ರಯ ನೀಡುವ ತಾಣಗಳೆಂದರೆ ನಾಪೋಕ್ಲು, ಮೂರ್ನಾಡು ಹಾಗೂ ವೀರಾಜಪೇಟೆ. ಈ ಪಟ್ಟಣಗಳ ನಡುವೆ ಇರುವ ಹೆಮ್ಮರಗಳಲ್ಲಿ ಗುಂಪು ಗುಂಪಾಗಿ ಬೀಡು ಬಿಡುವ ಬೆಳ್ಳಕ್ಕಿಗಳು ಪಟ್ಟಣದ ಜನಜಂಗಳಿಯ ನಡುವೆ ತಮ್ಮ ಕಲರವದಿಂದ ಗಮನಸೆಳೆಯುವುದರೊಂದಿಗೆ ನೀಲಾಗಸದಲ್ಲಿ ಸ್ವಚ್ಛಂದವಾಗಿ ಹಾರಾಡುತ್ತಾ ಗೂಡುಕಟ್ಟುವುದರಲ್ಲಿ, ಮೊಟ್ಟೆಯಿಟ್ಟು ಮರಿಮಾಡುವುದರಲ್ಲಿ ನಿರತವಾಗುವ ದೃಶ್ಯ ಗಮನ ಸೆಳೆಯುತ್ತದೆ. ಹಸಿರ ಹೆಮ್ಮರಗಳಲ್ಲಿ ಬೀಡುಬಿಟ್ಟ ಬೆಳ್ಳಕ್ಕಿಗಳನ್ನು ದೂರದಿಂದ ನೋಡಿದರೆ ಮಂಡ್ಯದ ಕೊಕ್ಕರೆ ಬೆಳ್ಳೂರು ನೆನಪಾಗುತ್ತದೆ.
ಮೊದಲಿಗೆ ಬೆಳ್ಳಕ್ಕಿಗಳು ನಾಪೋಕ್ಲಿನ ಹೆಮ್ಮರಗಳಲ್ಲಿ ಕಂಡು ಬಂದಿದ್ದವು. ಕೆಲವೇ ಕೆಲವು ಬಂದಿದ್ದ ಬೆಳ್ಳಕ್ಕಿಗಳು ತಮ್ಮ ಸಂತಾನೋತ್ಪತ್ತಿಮಾಡಿಕೊಂಡು ಹಿಂತಿರುಗಿದ್ದವು. ಇಲ್ಲಿ ಆಹಾರದ ಸಮಸ್ಯೆ, ಜನರಿಂದ ಕಿರುಕುಳ ಇಲ್ಲದ್ದರಿಂದ ಮುಂದಿನ ವರ್ಷಗಳಿಂದ ವಲಸೆ ಬರುವ ಹಕ್ಕಿಗಳ ಸಂಖ್ಯೆಯೂ ಹೆಚ್ಚಾಯಿತು. ಆ ನಂತರ ನಾಪೋಕ್ಲು ಮಾತ್ರವಲ್ಲದೆ, ಮೂರ್ನಾಡು ಮಡಿಕೇರಿ ರಸ್ತೆಯಲ್ಲಿರುವ ಹಾಕತ್ತೂರಿನ ಹೆಮ್ಮರಗಳಲ್ಲಿ ಬೀಡುಬಿಡತೊಡಗಿದವು. ಕೆಲವು ವರ್ಷಗಳ ಕಾಲ ಇಲ್ಲಿ ಬೆಳ್ಳಕ್ಕಿಗಳ ಕಲರವ ಕೇಳಿಸುತ್ತಿತ್ತಾದರೂ ಇಲ್ಲಿದ್ದ ಮರಗಳನ್ನು ಕಡಿದಿದ್ದರಿಂದ ಮೂರ್ನಾಡು, ನಾಪೋಕ್ಲು ಹಾಗೂ ವೀರಾಜಪೇಟೆಯಲ್ಲಿ ತಮ್ಮ ವಾಸ್ತವ್ಯ ಬದಲಿಸಿದ ಬೆಳ್ಳಕ್ಕಿಗಳು ಇದೀಗ ಖಾಯಂ ಮಾಡಿಕೊಂಡಿವೆ.
ಸಾಮಾನ್ಯವಾಗಿ ಮುಂಗಾರು ಆರಂಭವಾಗುತ್ತಿದ್ದಂತೆಯೇ ಅಂದರೆ ಮೇ-ಜೂನ್ ತಿಂಗಳಲ್ಲಿ ಹಿಂಡು ಹಿಂಡಾಗಿ ಬರುವ ಬೆಳ್ಳಕ್ಕಿಗಳು ನಾಪೋಕ್ಲು ಹಾಗೂ ಮೂರ್ನಾಡು, ವೀರಾಜಪೇಟೆ (ಕೆಎಸ್ಆರ್ ಟಿಸಿ ಬಸ್ ನಿಲ್ದಾಣ ಬಳಿ) ಪಟ್ಟಣದ ಹೆಮ್ಮರಗಳಲ್ಲಿ ಬೀಡುಬಿಡುತ್ತವೆ.
ಆ ನಂತರ ಸುತ್ತಮುತ್ತಲಿನ ಕಾಫಿ, ಏಲಕ್ಕಿ ತೋಟಗಳಿಂದ ಕಡ್ಡಿಕಸಗಳನ್ನು ಹೆಕ್ಕಿ ತಂದು ಮರಗಳಲ್ಲಿ ಗೂಡುಕಟ್ಟುವುದರಲ್ಲಿ ನಿರತವಾಗುತ್ತವೆ. ಬಳಿಕ ಮೊಟ್ಟೆಯಿಡುವ ಸಂಭ್ರಮ. ಈ ಸಂದರ್ಭ ಹೆಣ್ಣುಹಕ್ಕಿಗಳು ಮರಗಳಲ್ಲಿಯೇ ಉಳಿದು ಮೊಟ್ಟೆಯಿಡುವುದರಲ್ಲಿ, ಕಾವು ಕೊಡುವುದರಲ್ಲಿ ನಿರತರಾದರೆ, ಗಂಡು ಬೆಳ್ಳಕ್ಕಿಗಳು ದೂರದ ಗದ್ದೆ ಬಯಲಿನಿಂದ ಅಡ್ಡಾಡಿ ಹುಳಹುಪ್ಪಟೆಗಳನ್ನು ತರುತ್ತವೆ. ಮೊಟ್ಟೆಯಿಟ್ಟು ಮರಿ ಮಾಡಿದ ನಂತರ ಮರಿಗಳಿಗೆ ಗುಟುಕು ನೀಡುವ ಕೆಲಸ ತಾಯಿಬೆಳ್ಳಕ್ಕಿಯದು. ಅಲ್ಲಿ, ಇಲ್ಲಿ ಸುತ್ತಾಡಿ ಆಹಾರವನ್ನು ತಂದು ಮರಿ ಹಕ್ಕಿಗಳಿಗೆ ಗುಟುಕು ನೀಡುವ ದೃಶ್ಯ ಮನಮೋಹಕವಾಗಿರುತ್ತದೆ.
ಸುತ್ತಮುತ್ತ ಗದ್ದೆಬಯಲುಗಳಿರುವುದರಿಂದ ಉಳುಮೆ ಮಾಡಿದಾಗ ಗದ್ದೆಗಳಲ್ಲಿ ಹುಳಹುಪ್ಪಟೆಗಳು ಹೇರಳವಾಗಿ ಸಿಗುತ್ತವೆ. ಮರಿಗಳು ಬೆಳೆದು ರೆಕ್ಕೆಪುಕ್ಕ ಹುಟ್ಟುತ್ತಿದ್ದಂತೆಯೇ ಹಾರಾಟ ಕಲಿಸುತ್ತವೆ. ಈ ಸಂದರ್ಭ ಹಕ್ಕಿಗಳ ಚೀರಾಟ... ಹಾರಾಟ... ಮುಗಿಲು ಮುಟ್ಟುತ್ತದೆ. ಜನರ ಸದ್ದಿಗೆ, ವಾಹನಗಳ ಓಡಾಟಕ್ಕೆ ಇವು ಕ್ಯಾರೆ ಎನ್ನದೆ ತಮ್ಮ ಕಾರ್ಯಗಳಲ್ಲಿ ನಿರತವಾಗಿಬಿಡುತ್ತವೆ. ನವೆಂಬರ್ ತಿಂಗಳ ವೇಳೆಗೆ ತಮ್ಮ ಮರಿಗಳೊಂದಿಗೆ ತಮ್ಮ ಸ್ವಸ್ಥಾನಕ್ಕೆ ಮರಳುತ್ತವೆ. ಮತ್ತೆ ಇವುಗಳನ್ನು ನೋಡಬೇಕಾದರೆ ಮುಂದಿನ ಮಳೆಗಾಲವೇ ಬರಬೇಕು. ಪಟ್ಟಣಗಳ ಹೃದಯ ಭಾಗದಲ್ಲಿಯೇ ಬೀಡು ಬಿಡುತ್ತಿರುವುದರಿಂದ ತೊಂದರೆಯಾಗುತ್ತದೆಯಾದರೂ ಇವುಗಳನ್ನು ಸಹಿಸಿಕೊಂಡು ಸಂತನೋತ್ಪತ್ತಿಗೆ ಜನರು ಸಹಕರಿಸುತ್ತಿದ್ದಾರೆ. ಹಾಗಾಗಿ ಪ್ರತಿವರ್ಷವೂ ಇಲ್ಲಿಗೆ ಬಂದೇ ಬರುತ್ತವೆ.
ಬೆಳ್ಳಿತೆರೆಯಲ್ಲೂ ಮಿಂಚಲು ರೆಡಿ: ಅನುಶ್ರೀ
ಕನ್ನಡ ಚಿತ್ರರಂಗ ಮತ್ತು ಕಿರುತೆರೆಗೆ ಯಾವತ್ತೂ ಅವಿನಾಭಾವ ಸಂಬಂಧ. ಒಂದು ಕಡೆ ಕನ್ನಡ ಚಿತ್ರರಂಗ, ಕನ್ನಡ ಚಿತ್ರಗಳಿಗೆ ಪ್ರೇಕ್ಷಕರಿಲ್ಲ, ಚಿತ್ರಗಳು ಓಡುತ್ತಿಲ್ಲ ಎಂದು ಕೂಗುತ್ತಿದ್ದರೆ, ಇನ್ನೊಂದೆಡೆ ಕನ್ನಡ ಕಿರುತೆರೆ...
ಕೊಡಗಿನ ಮಳೆಗಾಲದ ಸುಂದರಿ ಡೇಲಿಯಾ
ಮುಂಗಾರು ಮಳೆ ಸುರಿದಾಗ ಮನೆಮುಂದಿನ ಹೂತೋಟದಲ್ಲಿ ಸುಪ್ತವಾಗಿದ್ದ ಡೆಲೀಯಾ ಗೆಡ್ಡೆಗಳು ಮೊಳಕೆಯೊಡೆದು ಗಿಡಗಳಾಗಿ ವಿವಿಧ ಆಕಾರ, ಬಣ್ಣಗಳಲ್ಲಿ ಗೊಂಚಲುಗೊಂಚಲಾಗಿ ಹೂಬಿಟ್ಟು ಕಂಗೊಳಿಸುತ್ತವೆ.
ಬಿಹಾರದ ಜೆಡಿಯು ಸರ್ಕಾರ ಭದ್ರ
ಪಟ್ನಾ: ಬಿಜೆಪಿಯೊಂದಿಗಿನ ಮೈತ್ರಿ ಕಡಿದುಕೊಂಡ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಸರ್ಕಾರ ಬುಧವಾದ ವಿಶ್ವಾಸಮತ ಗೆದ್ದುಕೊಂಡಿದೆ. ಬಿಜೆಪಿ ವಿಶ್ವಾಸಮತ ಯಾಚನೆ ವಿರುದ್ಧ
ಕೊನೆಗೂ ಕೇರಳ ಸಿಎಂಗೆ ಕೈಗೆ ಮೊಬೈಲ್!
ತಿರುವನಂತಪುರಂ: ತುಂಬಾ ಸರಳ ಜೀವಿಯಾಗಿರುವ ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂದಿ ಅವರು ಸದ್ಯದಲ್ಲೇ ಮೊಬೈಲ್ ಫೋನ್ ಖರೀದಿ ಮಾಡಲಿದ್ದಾರಂತೆ. ಚಾಂದಿ ಅವರ ಬಳಿಯಲ್ಲಿ ಸ್ವಂತ ಮೊಬೈಲ್ ಇಲ್ಲದಿದ್ದ ಕಾರಣ
ಉಗ್ರ ಸಂಘಟನೆಗೆ ಪಾಕ್ ಸರ್ಕಾರದ ಅನುದಾನ
ಲಾಹೋರ್: 2008ರ ಮುಂಬಯಿ ಸ್ಪೋಟದಲ್ಲಿ ಭಾಗಿಯಾಗಿರುವ ನಿಷೇಧಿತ ಲಷ್ಕರ್-ಎ-ತೊಯ್ಬಾದ ಅಂಗ ಸಂಸ್ಥೆಯಾಗಿರುವ ಜಮಾತ್ ಉದ್-ದವಾ(ಜೆಯುಡಿ)ಗೆ ಪಾಕಿಸ್ತಾನದ ಪಂಜಾಬ್ ಪ್ರಾಂತೀಯ ಸರ್ಕಾರವು
ಡಿಎಸ್ ಪಿ ಕಾರು ಅವಘಡಕ್ಕೆ ಪಾದಚಾರಿಗಳ ಸಹಿತ ಐವರು ಬಲಿ
ಪುಣೆ: ಸೋಮವಾರ ಸಂಜೆ ಉಪ ಪೊಲೀಸ್ ಆಯುಕ್ತರೊಬ್ಬರು ತನ್ನ ಕಾರಿನ ನಿಯಂತ್ರಣ ಕಳಕೊಂಡು ಪಾದಚಾರಿಗಳಿಗೆ ಡಿಕ್ಕಿ ಹೊಡೆದಿದ್ದು, ಈ ದುರ್ಘಟನೆಯಲ್ಲಿ ಐದು ಮಂದಿ ಸಾವನ್ನಪ್ಪಿದ್ದಾರೆ.

Write Your Comment Here...