12 ರೂಪಾಯಿ 25 ಪೈಸೆಯಲ್ಲಿ ಮದುವೆಯಾಗೋಣ ಬನ್ನಿ !
[Updated 23/07/2012 02:05 pm ][Author: Ramya B N]ರಮ್ಯಾ ಬಿ.ಎನ್
ಮದುವೆಯ ಸೀಸನ್ ಬಂತದ್ರೆ, ಮದುಮಗಳ ತಂದೆಯ ಜೇಬಿಗೆ ಕತ್ರಿ ಬಿದ್ದಂತಲೆ ಅರ್ಥ. ಈಗಿನ ಆಧುನಿಕತೆಯೊಂದಿಗೆ ಆಢಂಬರಕ್ಕೂ ಹೆಚ್ಚಿನ ಆದ್ಯತೆ. ಇನ್ನು ಬೆಲೆ ಏರಿಕೆ ನಡುವೆ ಒಂದು ಮದುವೆಗೆ ಬೇಕಾದ ಎಲ್ಲಾ ಸಿದ್ದತೆಗಳನ್ನು ಮಾಡಲು ಲಕ್ಷಾಂತರ ರೂಪಾಯಿಯನ್ನು ಖಾತೆಯಲ್ಲಿ ಜಮಾಯಿಸಬೇಕಷ್ಟೆ. 12 ರೂಪಾಯಿಗೆ ಒಂದು ಹೂವಿನ ಗುಚ್ಚ ಕೂಡ ಬರಲ್ವಾ, ಇನ್ನು 25 ಪೈಸೆಯಲ್ಲಿ ಮದುವೆ ಕಾರ್ಯಕ್ರಮ ಮುಗಿಯಿತು ಎಂದರೆ ಅದು ಅಚ್ಚರಿ ಪಡುವ ಮಾತಲ್ವಾ..?
ಬಿಳಿಗಿರಿ ಬೆಟ್ಟದ ತಪ್ಪಲಿನಲ್ಲಿರುವ ಸೋಲಿಗ ಬುಡಕಟ್ಟಿನ ಜನಾಂಗದವರ ಮದುವೆ ವೈಖರಿ ಮತ್ತು ಅದರ ಹಿನ್ನೆಲೆಯೆ ಅಂತದು, ಅಚ್ಚರಿ ಮೂಡಿಸುವಂತದು ಎಂದರೆ ತಪ್ಪಾಗಲಾರದು.
ಸೋಲಿಗರು ಚಾಮರಾಜ ನಗರದ ಆಸುಪಾಸಿನ ಬೆಟ್ಟದ ತಪ್ಪಲಿನಲ್ಲಿ ಬೇರೂರಿರುವ ಬುಡಕಟ್ಟಿನ ಜನಾಂಗದವರು. ರಾಜ್ಯದಲ್ಲಿ 46,000 ಜನಸಂಖ್ಯೆ ಹೊಂದಿರುವ ಇವರು ಹೆಚ್ಚಾಗಿ ಯೆಳಂದೂರು, ಕೊಳ್ಳೆಗಾಲ ತಾಲೂಕಿನಲ್ಲಿ ಬದುಕುತ್ತಾರೆ. ಸೋಲಿಗರ ನೃತ್ಯ ಹೆಚ್ಚು ಮಹತ್ವದ ಪಾತ್ರವಹಿಸುತ್ತದೆ ಎಂದರೆ ತಪ್ಪಿಲ್ಲ. ಏಕೆಂದರೆ, ಇವರು ನೃತ್ಯದ ಸಂದರ್ಭದಲ್ಲಿ ತಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವುದನ್ನು ರೂಢಿಸಿಕೊಂಡು ಬಂದಿದ್ದಾರೆ.
ವರ್ಷಕ್ಕೊಮ್ಮೆ ಮಾರ್ಚ್ ಏಪ್ರಿಲ್ ನ ಸುಗ್ಗಿಯ ಸಮಯದಲ್ಲಿ ರೊಟ್ಟಿ ಹಬ್ಬವನ್ನು ಆಚರಿಸುವ ವೇಳೆ ಹಾಗೂ ತಮ್ಮ ಬುಡಕಟ್ಟಿನ ದೈವಗಳಾದ ಜೆಡೆಯಪ್ಪ, ಕೆಟ್ಟಪ್ಪ,ದೊಡ್ಡಸಂಪಿಗೆ ಆರಾಧನೆಯ ವೇಳೆ ಗಂಡು ಮಕ್ಕಳು ನೃತ್ಯದಲ್ಲಿ ತೊಡಗುತ್ತಾರೆ.
ಆ ವೇಳೆ ನೋಡಲು ಸುತ್ತುವರಿದ ಹೆಣ್ಣು ಮಕ್ಕಳಲ್ಲಿ ಯಾರಿಗಾದರೂ ನ್ಯತ್ಯ ತಂಡದಲ್ಲಿರುವ ಹುಡುಗ ಇಷ್ಟವಾದಲ್ಲಿ ಅವನ ಮೇಲೆ ಕಲ್ಲು ಎಸೆಯುತ್ತಾಳೆ. ಅವನಿಗೂ ಆಕೆ ಇಷ್ಟವಾದಲ್ಲಿ ಇಬ್ಬರು ಕಾಡಿಗೆ ಹೋಗಿ 8 ದಿನಗಳ ಕಾಲ ಇದ್ದು ವಾಪಸ್ಸಾಗುತ್ತಾರೆ.
ವಾಪಾಸ್ ಬಂದ ನಂತರ ಪೋಡಿನ (ಹಳ್ಳಿಯ) ಯಜಮಾನ ಅವರಿಬ್ಬರು ಜೊತೆಯಾಗಿ ಬಾಳುವುದಾಗಿ ಪ್ರಮಾಣ ಮಾಡಿಸಿ ಕೊಳ್ಳುತ್ತಾರೆ. ಮದುಮಗ 12 ರೂಪಾಯಿ 25 ಪೈಸೆ ಸಮುದಾಯಕ್ಕೆ ತೆರೆ (ತಪ್ಪು ಕಾಣಿಕೆ) ಕೊಟ್ಟು ಮದುವೆಯಾಗುತ್ತಾನೆ.
ಸೋಲಿಗ ಬಸವರಾಜು ಮದುವೆಯ ಪದ್ದತಿ ವಿವರಿಸುತ್ತಾ, ಈಗಲೂ ಇದೇ ಪದ್ದತಿಯಲ್ಲಿ ಮದುವೆಗಳು ನಡೆಯುತ್ತದೆ. ಆದರೆ ಆಧುನಿಕತೆಯಿಂದ ಕಲ್ಲು ಎಸೆಯುವ ಜಾಗದಲ್ಲಿ, ಬಾಳೆಹಣ್ಣು, ಬಿಸ್ಕತ್ತು ಬಂದಿದೆ. ಹಾಗೆ ಕಾಡಿನಲ್ಲಿ 8 ದಿನ ಕಳೆಯುವ ಬದಲು ತನ್ನ ಸಂಬಂಧಿಕರ ಮನೆಗಳಲ್ಲಿ 8 ದಿನ ಕಳೆದು ಬರುವ ಪದ್ದತಿ ಆಗಿದೆ. ಇನ್ನು 12 ರೂಪಾಯಿ ,25 ಪೈಸೆಯ ಲೆಕ್ಕ ಹೇಗೆ ಅನ್ನೋ ಕುತೂಹಲಕ್ಕಾಗಿ ಬಸವರಾಜು ಅವರು ತಮ್ಮ ನಂಬಿಕೆಯ ಹಾಗೂ ಆಚರಣೆಯನ್ನು ವಿವರಿಸಿದ್ದು ಹೀಗೆ, ಹಿಂದೆ ಸೋಲಿಗ ಬೊಮ್ಮಗೌಡ - ರಂಗಮ್ಮ ದಂಪತಿಗಳಿದ್ರು, ಅವರಿಗೆ 7 ಜನ ಹೆಣ್ಣು ಮಕ್ಕಳು. ಅದರಲ್ಲಿ ಕೊನೆಯವಳೇ ಕುಸುಮಾಲಾದೇವಿ, ಆಕೆ ಇಡೀ ಬುಡಕಟ್ಟಿನಲ್ಲೇ ರೂಪವತಿಯಾಗಿದ್ದಳು.
ಆಗಿನ ಕಾಲಕ್ಕೆ ಸಿಹಿಗೆಣಸು ಬುಡಗಟ್ಟಿನ ಜನರ ದೈನಂದಿನ ಆಹಾರವಾಗಿತ್ತು. ಕುಸುಮಾಲಾದೇವಿ ತನ್ನ 6 ಸೋದರಿಯರೊಂದಿಗೆ ಮಣ್ಣು ಅಗೆದು ಸಿಹಿಗೆಣಸು ಹುಡುಕಲು ಹೋಗುತ್ತಾಳೆ. ಆಗ, ಬಿಳಿಗಿರಿ ರಂಗ ಸ್ವಾಮಿ, ಕುಸುಮಾದೇವಿಯ ಸೌಂದರ್ಯಕ್ಕೆ ಸೋತು ಅವಳನ್ನು ಮದುವೆಯಾಗಬೇಕೆಂದು ನಿಶ್ಚಯಿಸುತ್ತಾನೆ. ಕುಸುಮಾಲಾದೇವಿಯೊಡನೆ ಒಂಟಿಯಾಗಿ ಮಾತನಾಡಲು ತನ್ನ ಮಾಯ ಶಕ್ತಿಯಿಂದ, ಅವಳೆಲ್ಲಾ ಸೋದರಿಯರಿಗೆ ಹೆಚ್ಚು ಗೆಣಸು ಸಿಕ್ಕಿ ತಮ್ಮ ತಮ್ಮ ಮನೆಗೆ ಹಿಂದಿರುಗುವ ಹಾಗೆ ಮಾಡಿ ಕುಸುಮಾಲಾದೇವಿಯನ್ನು ಒಬ್ಬಳೇ ಸಿಹಿಗೆಣಸಿಗಾಗಿ ಹುಡುಕುವ ಹಾಗೆ ಮಾಡುತ್ತಾನೆ. ಒಬ್ಬಳೆ ಇರುವಾಗ ಅವಳಿಗೂ ಅತೀ ಹೆಚ್ಚು ಸಿಹಿ ಗೆಣಸು ಸಿಕ್ಕಿ ತಲೆಯ ಮೇಲೆ ಎತ್ತಿಕೊಳ್ಳಲು ಸಹಾಯಕ್ಕಾಗಿ ಕೂಗುತ್ತಾಳೆ. ಆಗ ಬಿಳಿಗಿರಿ ರಂಗ ಸ್ವಾಮಿಯು ಮುದುಕನ ವೇಷದಲ್ಲಿ ಬಂದು ಮದುವೆಯಾಗುವಂತೆ ಕೇಳಿಕೊಳ್ಳುತ್ತಾನೆ.
ಮುದುಕ ತಮಾಷೆ ಮಾಡುತ್ತಿದ್ದಾನೆಂದು ಅವಳು ಒಪ್ಪಿಕೊಳ್ಳುತ್ತಾಳೆ. ಸಿಹಿ ಗೆಣಸಿನ ಕಟ್ಟನ್ನು ತಲೆಯ ಮೇಲೆತ್ತಿಡುವಾಗ ತನ್ನ ನಿಜವಾದ ರೂಪವನ್ನು ಬಿಳಿಗಿರಿ ರಂಗಸ್ವಾಮಿ ತೋರಿಸಿದೊಡನೆ ಕುಸುಮಾಲಾದೇವಿ ಕೂಡ ಅವನನ್ನು ಪ್ರೀತಿಸುತ್ತಾಳೆ. ಮನೆಯಲ್ಲಿ ಹೇಳಲು ಧೈರ್ಯವಿಲ್ಲದೆ 8 ದಿನಗಳ ಕಾಲ ಕಾಡಿನಲ್ಲೇ ಉಳಿಯುತ್ತಾಳೆ. ನಂತರ ಹಿಂದಿರುಗುವಾಗ ಬಿಳಿಗಿರಿ ರಂಗಸ್ವಾಮಿಯು ಕುಸುಮಾಲಾದೇವಿಯ ತಂದೆಗೆ ತಪ್ಪು ಕಾಣಿಕೆಯಾಗಿ ವಜ್ರ ವೈಢೂರ್ಯವನ್ನು ಒಪ್ಪಿಸಿ, ಕೋಪಗೊಂಡ ಬೊಮ್ಮೆಗೌಡ ಅದನ್ನು ದೂಡುತ್ತಾನೆ. ನೆಲಕ್ಕೆ ಬೀಳದಂತೆ ತಡೆಯಲು ತಾಯಿ ರಂಗಮ್ಮ ಸೆರಗನ್ನು ಒಡಿದ್ದಾಗ 12 ಕಾಲು ಆಣಿ ಮಾತ್ರ ಅವಳ ಸೆರಗಿಗೆ ಬೀಳುತ್ತದೆ. ಆಗಿನ 12 .25 ಆಣಿ ಈಗ 12.25 ರೂಪಾಯಿಯಾಗಿ ಅದೇ ಪದ್ದತಿ ಮುಂದುವರೆದಿದೆ. ಸೋಲಿಗರ ನಂಬಿಕೆಯ ಪ್ರಕಾರ ಕುಸುಮಾಲಾದೇವಿ ಬುಡಕಟ್ಟಿನ ಸೋದರ ಹಾಗೂ ಅವಳ ಮದುವೆ ಸಂಭ್ರಮವನ್ನು ಹಾಡಿ ಕುಣಿದು ಆಚರಿಸುತ್ತಾರೆ.

Comments
sandesh ,mangalore
nice article...
ಬೆಳ್ಳಿತೆರೆಯಲ್ಲೂ ಮಿಂಚಲು ರೆಡಿ: ಅನುಶ್ರೀ
ಕನ್ನಡ ಚಿತ್ರರಂಗ ಮತ್ತು ಕಿರುತೆರೆಗೆ ಯಾವತ್ತೂ ಅವಿನಾಭಾವ ಸಂಬಂಧ. ಒಂದು ಕಡೆ ಕನ್ನಡ ಚಿತ್ರರಂಗ, ಕನ್ನಡ ಚಿತ್ರಗಳಿಗೆ ಪ್ರೇಕ್ಷಕರಿಲ್ಲ, ಚಿತ್ರಗಳು ಓಡುತ್ತಿಲ್ಲ ಎಂದು ಕೂಗುತ್ತಿದ್ದರೆ, ಇನ್ನೊಂದೆಡೆ ಕನ್ನಡ ಕಿರುತೆರೆ...
ಕೊಡಗಿನ ಮಳೆಗಾಲದ ಸುಂದರಿ ಡೇಲಿಯಾ
ಮುಂಗಾರು ಮಳೆ ಸುರಿದಾಗ ಮನೆಮುಂದಿನ ಹೂತೋಟದಲ್ಲಿ ಸುಪ್ತವಾಗಿದ್ದ ಡೆಲೀಯಾ ಗೆಡ್ಡೆಗಳು ಮೊಳಕೆಯೊಡೆದು ಗಿಡಗಳಾಗಿ ವಿವಿಧ ಆಕಾರ, ಬಣ್ಣಗಳಲ್ಲಿ ಗೊಂಚಲುಗೊಂಚಲಾಗಿ ಹೂಬಿಟ್ಟು ಕಂಗೊಳಿಸುತ್ತವೆ.
ಬಿಹಾರದ ಜೆಡಿಯು ಸರ್ಕಾರ ಭದ್ರ
ಪಟ್ನಾ: ಬಿಜೆಪಿಯೊಂದಿಗಿನ ಮೈತ್ರಿ ಕಡಿದುಕೊಂಡ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಸರ್ಕಾರ ಬುಧವಾದ ವಿಶ್ವಾಸಮತ ಗೆದ್ದುಕೊಂಡಿದೆ. ಬಿಜೆಪಿ ವಿಶ್ವಾಸಮತ ಯಾಚನೆ ವಿರುದ್ಧ
ಕೊನೆಗೂ ಕೇರಳ ಸಿಎಂಗೆ ಕೈಗೆ ಮೊಬೈಲ್!
ತಿರುವನಂತಪುರಂ: ತುಂಬಾ ಸರಳ ಜೀವಿಯಾಗಿರುವ ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂದಿ ಅವರು ಸದ್ಯದಲ್ಲೇ ಮೊಬೈಲ್ ಫೋನ್ ಖರೀದಿ ಮಾಡಲಿದ್ದಾರಂತೆ. ಚಾಂದಿ ಅವರ ಬಳಿಯಲ್ಲಿ ಸ್ವಂತ ಮೊಬೈಲ್ ಇಲ್ಲದಿದ್ದ ಕಾರಣ
ಉಗ್ರ ಸಂಘಟನೆಗೆ ಪಾಕ್ ಸರ್ಕಾರದ ಅನುದಾನ
ಲಾಹೋರ್: 2008ರ ಮುಂಬಯಿ ಸ್ಪೋಟದಲ್ಲಿ ಭಾಗಿಯಾಗಿರುವ ನಿಷೇಧಿತ ಲಷ್ಕರ್-ಎ-ತೊಯ್ಬಾದ ಅಂಗ ಸಂಸ್ಥೆಯಾಗಿರುವ ಜಮಾತ್ ಉದ್-ದವಾ(ಜೆಯುಡಿ)ಗೆ ಪಾಕಿಸ್ತಾನದ ಪಂಜಾಬ್ ಪ್ರಾಂತೀಯ ಸರ್ಕಾರವು
ಡಿಎಸ್ ಪಿ ಕಾರು ಅವಘಡಕ್ಕೆ ಪಾದಚಾರಿಗಳ ಸಹಿತ ಐವರು ಬಲಿ
ಪುಣೆ: ಸೋಮವಾರ ಸಂಜೆ ಉಪ ಪೊಲೀಸ್ ಆಯುಕ್ತರೊಬ್ಬರು ತನ್ನ ಕಾರಿನ ನಿಯಂತ್ರಣ ಕಳಕೊಂಡು ಪಾದಚಾರಿಗಳಿಗೆ ಡಿಕ್ಕಿ ಹೊಡೆದಿದ್ದು, ಈ ದುರ್ಘಟನೆಯಲ್ಲಿ ಐದು ಮಂದಿ ಸಾವನ್ನಪ್ಪಿದ್ದಾರೆ.

Write Your Comment Here...