ಮತ್ತೆ ಬೀದಿ ಪಾಲಾದರೇ ಕನ್ನಡದ ರತ್ನ?
[Updated 04/07/2012 03:39 pm ][Author: ]
ಗಣೇಶ್ ಕಾಸರಗೋಡು
ಹಿರಿಯ ಸಂಗೀತ ನಿರ್ದೇಶಕ ಆರ್.ರತ್ನ ಯಾರಿಗೆ ಗೊತ್ತಿಲ್ಲ ಹೇಳಿ? ದುರಂತವೆಂದರೆ ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಒಮ್ಮೆ ರತ್ನ ಕಾಲವಾಗಿದ್ದಾರೆ ಎಂದು ಅನುಮಾನ ಪಟ್ಟದ್ದು! ಅದು ಈಟಿವಿಯ ಎದೆ ತುಂಬಿ ಹಾಡುವೆನು ಕಾರ್ಯಕ್ರಮ. ಇದರ ಸಾರಥ್ಯ ವಹಿಸಿದ್ದ ಎಸ್.ಪಿ. ಅವರು ಒಂದು ಹಂತದಲ್ಲಿ ಈ ಹಾಡುಗಳು ದಿವಂಗತ ರತ್ನ ಅವರಿಗೆ ಅರ್ಪಣೆ ಎಂದೆನ್ನಬೇಕೆ? ಈಟಿವಿಯಲ್ಲಿ ಇದನ್ನು ಗಮನಿಸಿದ ನಾನು ಸಮಾರಂಭವೊಂದರಲ್ಲಿ ಭೇಟಿಯಾದ ಎಸ್.ಪಿ.ಅವರಿಗೆ ರತ್ನ ಇನ್ನೂ ಬದುಕಿದ್ದಾರೆ ಎನ್ನುವುದನ್ನು ಲೇಖನ ಸಮೇತ ತಿಳುವಳಿಕೆ ನೀಡಿದ್ದೆ. ಪೆಚ್ಚು ಮೋರೆ ಹಾಕಿಕೊಂಡ ಎಸ್.ಪಿ. ಅವರು ತಮ್ಮ ಮುಂದಿನ ಕಾರ್ಯಕ್ರಮದಲ್ಲಿ ತಿದ್ದುಪಡಿ ಘೋಷಿಸಿ ರತ್ನ ಅವರಿಗೆ ಆಯುರಾರೋಗ್ಯವನ್ನು ದೇವರಲ್ಲಿ ಪ್ರಾರ್ಥಿಸಿದ್ದರು!
ಇಂಥಾ ರತ್ನ ಅವರ ಬಗ್ಗೆ ಗೊತ್ತಿಲ್ಲದವರಿಗಾಗಿ ಈ ಟಿಪ್ಸ್ ಕೊಡುತ್ತಿದ್ದೇನೆ: ಮೊಟ್ಟಮೊದಲು ಈ ಗೀತೆಗಳನ್ನು ಗಮನಿಸಿ- ಅಮ್ಮ ನಿನ್ನ ತೋಳಿನಲ್ಲಿ ಕಂದಾ ನಾನು... ಈ ಚೆಂದದ ಮನೆಯಲ್ಲಿ... ಈಶ್ವರನೆಂದರೂ ಒಬ್ಬನೇ, ಅಲ್ಲಾ ಎಂದರೂ ಒಬ್ಬನೇ.. ಹೋಗದಿರೀ ಸೋದರರೇ... ಮಮತೆಯ ತೋಟದ ಮಡಿಲಲ್ಲಿ... ಚೆಲುವಿನ ಗಣಿಯಾಗಿ... ಚೂರಾಯಿತೇ ಒಲವಿನ ಚಿತ್ರ... ಕದ್ದು ನೋಡುವೆ ಏಕೆ ಎಲೆ ಹೆಣ್ಣೆ... ಬೆಳೆದಿದೆ ನೋಡಾ ಬೆಂಗಳೂರು ನಗರ... - ಇಂಥಾ ಇಂಪಾದ ಗೀತೆಗಳಿಗೆ ರಾಗ ಸಂಯೋಜಿಸಿದ ಮಹಾನ್ ಸಂಗೀತ ನಿರ್ದೇಶಕ ಆರ್.ರತ್ನ ಅವರನ್ನು ಪರಿಚಯಿಸುವ ಸಲುವಾಗಿ ಇಷ್ಟನ್ನು ಬರೆಯಬೇಕಾಯಿತು. ಕನ್ನಡ ಚಿತ್ರ ರಂಗದ ಹೆಮ್ಮೆಯ ಸಂಗೀತ ನಿರ್ದೇಶಕರಾದ ಇವರು ಆರೇಳು ವರ್ಷಗಳ ಹಿಂದೆ ಚೆನೈನ ಮುರುಕು ಜೋಪಡಿಯಲ್ಲಿ ಬದುಕು ಸಾಗಿಸುತ್ತಿದ್ದರು ಅಂದರೆ ನೀವು ನಂಬ್ತೀರಾ? ನಂಬಲೇ ಬೇಕು, ಏಕೆಂದರೆ ಇದಕ್ಕೆ ಸಾಕ್ಷಾತ್ ನಾನೇ ಸಾಕ್ಷಿ.
ಅಕ್ಷರಶಃ ಅದೊಂದು ಜೋಪಡಿ. ಚೆನೈನ ಕೆಳವರ್ಗದ ಕೂಲಿಕಾರರು ಬದುಕು ಕಂಡುಕೊಳ್ಳಬಹುದಾದಂಥಾ ಶೀಟಿನ ಪುಟ್ಟ ಮನೆ. ಸುಣ್ಣ ಬಣ್ಣ ಕಾಣದೇ ಅದೆಷ್ಟು ವರ್ಷಗಳಾಗಿತ್ತೋ? ಅಲ್ಲಲ್ಲಿ ಸಿಂಬಳದ ಗಲೀಜು, ಗೋಡೆ ತುಂಬಾ ತಿಗಣೆಗಳನ್ನು ಹಿಚುಕಿ ಕೊಂದ ಗುರುತುಗಳು. ಒಂದೇ ಒಂದು ಕೋಣೆ. ಆ ಕೋಣೆಯ ಮೂಲೆಯೊಂದರಲ್ಲಿ ಹಾಸಿದ್ದ ಹರಕಲು ಚಾಪೆ. ಇದುವೇ ಖ್ಯಾತ ಸಂಗೀತ ನಿರ್ದೇಶಕ ರತ್ನ ಅವರ ಪಲ್ಲಂಗ! ನಮ್ಮನ್ನು ನೋಡುತ್ತಲೇ ಹುಬ್ಬಿಗೆ ಅಡ್ಡವಾಗಿ ಕೈ ಹಿಡಿಯುತ್ತಾ ಹೊರಗಿನ ಬೆಳಕಿಗೆ ಕಣ್ಣು ಹೊಂದಿಸಲಾಗದೇ ಚಡಪಡಿಸುತ್ತಾ ಆ ವೃದ್ಧರು ಎದ್ದು ನಿಲ್ಲುವ ಪ್ರಯತ್ನ ಪಟ್ಟರು. ಕೊನೆಗೆ ವಿಫಲರಾಗಿ ಹಾಸಿಗೆ ಮೇಲೆ ಕುಕ್ಕರಿಸಿದರು.
ಪ್ರಾಸ್ತಾವಿಕವಾಗಿ ನಾನು ಪ್ರಶ್ನಿಸಿದೆ: ನಿಮ್ಮ ಈಗಿನ ಈ ಸ್ಥಿತಿಗೆ ಯಾರು ಕಾರಣ?ಕೇಳಿದ್ದು ಒಂದೇ ಪ್ರಶ್ನೆ ಉತ್ತರ ಮೈಲುದ್ದದ್ದು. ಎಡಿಟ್ ಮಾಡಿ ನಿಮ್ಮ ಮುಂದೆ ಹೀಗೆ ಪ್ರಸ್ತುತ ಪಡಿಸುತ್ತಿದ್ದೇನೆ:ನನ್ನ ಈ ದುಃಸ್ಥಿತಿಗೆ ನಾನೇ ಕಾರಣ. ತಪ್ಪು ಮಾಡಿದೆ. ಚಲಾವಣೆಯಲ್ಲಿದ್ದಾಗ ಹಣ ಕೂಡಿಡಲಿಲ್ಲ. ಅಪ್ಪ ನನ್ಗೆ ಒಂದು ಮದುವೆ ಮಾಡಿಸಿದರು, ನಾನು ಮತ್ತೊಂದು ಮಾಡಿಕೊಂಡೆ. ಎರಡು ಸಂಸಾರ. ನಾಲ್ಕು ಮಕ್ಕಳು. ಜತೆಗೆ ಕುಡಿತದ ಅಭ್ಯಾಸ, ಮುಂದೆ ಖರ್ಚು ಎಲ್ಲಾ ಸೇರಿ ದಿವಾಳಿ ಎದ್ದು ಹೋದೆ... ಈಗ ವಯಸ್ಸಾಗಿದೆ. ಆದ್ರೆ ನನ್ನ ಸಂಗೀತಕ್ಕೆ ವಯಸ್ಸಾಗಿಲ್ಲ. ಯಾರೇ ಕರೆದು ಅವಕಾಶಕೊಟ್ಟರೂ ಈ ಕ್ಷಣದಲ್ಲೂ ನಾನು ರೆಡಿ. ಆದ್ರೆ ಈ ಮುದುಕನನ್ನು ಕರೆದು ಯಾರು ಅವಕಾಶ ಕೊಡ್ತಾರೆ ಕೇಳಿ? ಅವರಿವರು ಕರೀತಾರೆ. ಮಕ್ಕಳಿಗೆ ಸಂಗೀತ ಹೇಳಿ ಕೊಡ್ತೇನೆ.
ಹೇಗೋ ಬದುಕು ಸಾಗಿದೆ. ನನ್ನ ದುಡಿಮೆಯ ಕಾಲದಲ್ಲಿ ಎಲ್ಲವನ್ನು ಅನುಭವಿಸಿದ್ದೇನೆ. ಆದ್ರೆ ಸರಕಾರ ಮಾತ್ರ ಮೌನ. ನಾನೂ ಕೇಳಿಲ್ಲ. ಪ್ರಶಸ್ತಿಯಂತೂ ಬಂದೇ ಇಲ್ಲ. ಬೇಜಾರಿಲ್ಲ. ಅಭಿಮಾನಿಗಳ ಅಭಿಮಾನದ ಮೆಚ್ಚುಗೆಯೇ ಪ್ರಶಸ್ತಿ ಅಂತ ಭಾವಿಸಿರೋನು ನಾನು...ಎಂದು ಹೇಳುತ್ತಿರುವಂತೆಯೇ ಮಾತು ತುಂಡರಿಸಿ ನಾನು ಪ್ರಶ್ನಿಸಿದೆ: ನೀವು ಸಂಗೀತ ನಿರ್ದೇಶಕರಾಗಿ ಹೇಗೆ ಕನ್ನಡ ಚಿತ್ರರಂಗಕ್ಕೆ ಬಂದಿರಿ?
ರತ್ನ ಮುಂದುವರಿಸಿದರು: ವಾಲ್ಮೀಕಿ ಎನ್ನುವ ಕನ್ನಡ ಚಿತ್ರವನ್ನು ಮದರಾಸಿನಲ್ಲಿ ತೆಲುಗಿಗೆ ಡಬ್ ಮಾಡುತ್ತಿದ್ದರು. ಸಾಹಿತಿ ಸಿ.ವಿ. ಶಿವಶಂಕರ್ ಇದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ನಾನು ಹಾರ್ಮೋನಿಯಂ ಹಿಡಿದು ಕುಳಿತಿದ್ದೆ. ಶಿವಶಂಕರ್ ಗೆ ಏನನ್ನಿಸಿತೋ ಏನೋ? ಒಂದು ಪಲ್ಲವಿ ಬರೆದು ಕೊಟ್ಟು ರಾಗ ಸಂಯೋಜಿಸುವಂತೆ ಹೇಳಿ ಕಾಫಿಗೆ ಹೊರಟರು. ಅವರು ಬರುವಷ್ಟರಲ್ಲಿ ಹಾಡು ರೆಡಿ. ಹೀಗೆ ನಾನು ಸಂಗೀತ ನಿರ್ದೇಶಕ ಆದೆ. ಆ ಮೇಲೆ ಹಿಂದಿರುಗಿ ನೋಡಲಿಲ್ಲ. ಪುಟ್ಟಣ್ಣ ಕಣಗಾಲ್ ಅವರು ಕರೆದು ಕಪ್ಪು ಬಿಳುಪು ಚಿತ್ರಕ್ಕೆ ಸಂಗೀತ ನೀಡಲು ಅವಕಾಶ ಮಾಡಿಕೊಟ್ಟರು. ಚಿತ್ರಕ್ಕಿಂತ ಸಂಗೀತವೇ ಹೈಲೈಟಾಯಿತು. ಇದನ್ನು ಸಹಿಸದ ಪುಟ್ಟಣ್ಣ ಗುರ್ ಅಂದರು. ಆಮೇಲೆ ಕರೆದು ಅವಕಾಶ ಕೊಡಲಿಲ್ಲ... ರತ್ನ ಮಾತು ನಿಲ್ಲಿಸಿದರು.
ಇವಿಷ್ಟು ವಿವರಗಳನ್ನು ನಾನು ಬರೆದೆ. ಇದನ್ನು ಓದಿದ ಬೆಂಗಳೂರಿನ ಮಹನೀಯರೊಬ್ಬರು ಚೆನೈಗೆ ಹೋಗಿ ರತ್ನರನ್ನು ಕರೆದುಕೊಂಡು ಬಂದು ತಮ್ಮ ಮನೆಯಲ್ಲಿಟ್ಟುಕೊಂಡರು. ತಂದೆಯಂತೆ ಸಾಕುತ್ತೇನೆ ಅಂದರು. ಅವರಿಗಾಗಿಯೇ ಸಂಗೀತ ಶಾಲೆಯೊಂದನ್ನು ಆರಂಭಿಸಿದರು. ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಕೈಯಲ್ಲೇ ಆ ಸಂಗೀತ ಶಾಲೆಯನ್ನು ಉದ್ಘಾಟಿಸಿದರು. ಪ್ರಚಾರ ಪಡೆದರು. ಮಕ್ಕಳು ಸಂಗೀತ ಕಲಿಯಲು ಈ ಶಾಲೆ ಸೇರಿಕೊಂಡರು. ಮನೆ ತುಂಬಾ ಮಕ್ಕಳು. ದುಡ್ಡು ಹರಿದು ಬಂತು. ಫಂಡ್ ಗಾಗಿ ದೊಡ್ಡ ಮಟ್ಟದ ಸಂಗೀತ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡರು ಬ್ಯಾಂಕ್ ಬ್ಯಾಲೆನ್ಸ್ ಏರುತ್ತಾ ಹೋಯಿತು. ಹಣ್ಣು ಹಣ್ಣು ಮುದುಕ ಚಿಗುರಿಕೊಂಡರು. ಮೇಲಿಂದ ಮೇಲೆ ಎಲ್ಲವೂ ಸರಿಯಾಗಿತ್ತು. ರತ್ನ ಅವರ ಒಳ ಬೇಗುದಿ ಯಾರಿಗೂ ಅರ್ಥವಾಗುವಂತಿರಲಿಲ್ಲ. ಎರಡು ಹೊತ್ತು ಊಟ, ರಾತ್ರಿ ಗುಂಡು ಉಚಿತ. ಮಲಗಲು ಒಂದು ರೂಮು. ಸಂಗೀತಕ್ಕಾಗಿ ದೊಡ್ಡದೊಂದು ಹಾಲ್... ಆದರೆ ರತ್ನರನ್ನು ಕರೆಸಿಕೊಂಡವರ ಹೃದಯ ದೊಡ್ಡದಾಗಿರಲಿಲ್ಲ. ಬ್ಯಾಂಕ್ ಬ್ಯಾಲೆನ್ಸ್ ಏರುತ್ತಿರುವಂತೆಯೇ ಬದಲಾಗಿ ಹೋದ ಆಯಪ್ಪ ರತ್ನರನ್ನು ನೆಗ್ಲೆಕ್ಟ್ ಮಾಡಲು ಹೊರಟರು....
ಒಂದು ಮಧ್ಯಾಹ್ನ ಸಾಕ್ಷಾತ್ ರತ್ನ ಅವರೇ ಫೋನ್ ಮಾಡಿ ಗುಟ್ಟೆನ್ನುವಂತೆ ನನಗೆ ಹೇಳಿಕೊಂಡರು: ಮಗಾ, ಇಲ್ಲಿ ಎಲ್ಲವೂ ಸರಿಯಾಗಿಲ್ಲ. ತೋರಿಕೆಗೆ ಮಾತ್ರ ನನಗೆ ಗೌರವ ಸಿಗುತ್ತಿದೆ. ನನ್ನ ಹೆಸರಿನಲ್ಲಿ ಏನೇನೋ ನಡೀತಿದೆ. ಬಂದ ಹಣವೆಲ್ಲಾ ಎಲ್ಲಿಗೆ ಹೋಗುತ್ತಿದೆ ಅಂತ ಗೊತ್ತಿಲ್ಲ. ಲಕ್ಷಾಂತರ ರೂಪಾಯಿ ಸಂಗ್ರಹವಾಗುತ್ತಿದೆ. ನನ್ನ ಗಮನಕ್ಕೆ ಬಾರದೇ ಅವು ಖರ್ಚಾಗುತ್ತಿವೆ. ನನಗೆ ಸಾಕು ಸಾಕಾಗಿದೆ. ಕೊಡುವ ಗೌರವವೂ ಕಮ್ಮಿಯಾಗಿದೆ. ನಾನು ಹೊರಟೆ. ನಟರಾಜ್ ಟಾಕೀಸಿನ ಪಕ್ಕದ ನಮ್ಮ ಸಮಾಜದ ಹಾಸ್ಟೆಲ್ಗೆ ನನ್ನನ್ನು ಕರೆಯುತ್ತಿದ್ದಾರೆ. ಅಲ್ಲಿಗೆ ಹೋಗುವ ನಿರ್ಧಾರಕ್ಕೆ ಬಂದಿದ್ದೇನೆ. ಎರಡು ಹೊತ್ತಿನ ಊಟಕ್ಕೆ ಮೋಸವಿಲ್ಲ. ಉಳಕೊಳ್ಳಲು ಜಾಗವಿದೆ. ಈ ಮುದುಕನಿಗೆ ಮತ್ತಿನ್ನೇನು ಬೇಕು ಮಗಾ? ಎಂದು ಪ್ರಶ್ನಿಸಿದ ಆರ್. ರತ್ನ ಕೊನೆಗೂ ನನ್ನ ಪಾಲಿಗೆ ಪ್ರಶ್ನೆಯಾಗಿಯೇ ಉಳಿದಿದ್ದಾರೆ. ನಂತರದ ದಿನಗಳಲ್ಲಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೆ ನಾಟ್ ರೀಚೆಬಲ್.
ತಡವಾಗಿ ಬಂದ ಸುದ್ದಿಯೊಂದು ಹೀಗಿದೆ: ಚೆನೈನಿಂದ ರತ್ನರನ್ನು ಕರೆಸಿಕೊಂಡ ಆಯಪ್ಪ ಈಗಿರುವ ಮನೆಯನ್ನು ಮಾರಿ ಬೇರೊಂದು ಜಾಗಕ್ಕೆ ಗುಳೆ ಹೊರಟಿದ್ದಾರಂತೆ. ಕನ್ನಡದ ರತ್ನ ಮತ್ತೆ ಬೀದಿಪಾಲು...
ಬಿಗ್ ಬಾಸ್ ನ ವಿನಾಯಕ್ ಜೋಶಿ ಜತೆ ನಮ್ ಸ್ಟೈಲ್ ನ ಮಾತುಕತೆ...
ವಿನಾಯಕ್ ಜೋಶಿ, ಒಂದ್ ಟೈಮ್ ನಲ್ಲಿ ಈ ಹೆಸರು ಕೇಳಿದಾಕ್ಷಣ ತಕ್ಷಣ ನೆನಪಿಗೆ ಬರ್ತಿದ್ದದ್ದು ನಮ್ಮೂರ ಮಂದಾರ ಹೂವೇ, ಅಮೃತ ವರ್ಷಿಣಿ ಚಿತ್ರದ ಗುಂಡು ಗುಂಡಾಗಿ, ಮುದ್ದು ಮುದ್ದಾಗಿದ್ದ ಪುಟ್ಟ ಬಾಲಕ.
ಆತ ರಕ್ಷಿಸಿದ ಮಗು ಬದುಕುಳಿಯಲಿಲ್ಲವೆಂದು ಬಿಕ್ಕಿಬಿಕ್ಕಿ ಅತ್ತಿದ್ದ...!
ದೇಶದ ಇತಿಹಾಸದಲ್ಲಿಯೇ ಭೀಕರ ದುರಂತವಾದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತಕ್ಕೆ ಇಂದಿಗೆ(ಮೇ 22) ಮೂರು ವರ್ಷಗಳು ತುಂಬುತ್ತಿದೆ. 2010ರ ಮೇ 22 ರಂದು ಬೆಳಗ್ಗೆ 6.05ರ...
ಮಾಯಾಲೋಕದ ಅಪೂರ್ವ ಬಾಲೆ...!
ಹ್ಯಾಟ್ ತಲೆಗೇರಿಸಿ, ಕೈಯಲ್ಲೊಂದು ಮಂತ್ರದಂಡ ಹಿಡಿದುಕೊಂಡು ಸ್ಟೇಜ್ ಏರಿದಳೆಂದರೆ ಎದುರು ಕುಳಿತವರು ಕಣ್ ಕಣ್ ಬಿಟ್ಟು ನೋಡುತ್ತಲೇ ಇರಬೇಕೆನ್ನುವ ಮಯಾ ಲೋಕವೇ ಸೃಷ್ಟಿಯಾಗಿಬಿಡುತ್ತದೆ. ಈ ಮಾಯಾಲೋಕದ...
ಚೊಚ್ಚಲ ಚಿತ್ರದಲ್ಲೇ ಕೇಳುಗರ ಮೋಡಿ ಮಾಡಿದ ಸಂಗೀತ ನಿರ್ದೇಶಕ ವಿಜೇತ್
ಕಳೆದ ಸಂಚಿಕೆಯಲ್ಲಿ ಸರ್ಜಾ ಕುಟುಂಬದಿಂದ ಚಿತ್ರರಂಗಕ್ಕೆ ನಟನಾಗಿ ಪ್ರವೇಶ ಮಾಡ್ತಾ ಇರೋ ಭರತ್ ಸರ್ಜಾ ರವರ ಬಗ್ಗೆ ಪರಿಚಯ ಮಾಡಿಸಲಾಯ್ತು. ಈ ಬಾರಿ ಸರ್ಜಾ ಕುಟುಂಬದ ಮತ್ತೊಬ್ಬನ ಪರಿಚಯ. ಆತ ಚಿತ್ರರಂಗವನ್ನು ಕಾಲಿಟ್ಟಿರುವುದು...
ಪ್ರಯೋಗ ಶೀಲ ಕಲಾವಿದನ ಕಲ್ಪನೆಯಲ್ಲಿ ಮೂಡಿದ ಕಾಗದ ಭಿತ್ತಿ ಶಿಲ್ಪಗಳು
ಆಧುನಿಕತೆ ಬೆಳೆದಂತೆಲ್ಲ ಕಲೆಯು ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಲಿದೆ. ಪ್ರಸುತ್ತ ಸಂದರ್ಭದಲ್ಲಿ ಕಲಾವಿದ ತನ್ನದೇ ಆದ ಮಾಧ್ಯಮದಿಂದ ಕಲಾಕೃತಿಗಳನ್ನು ರಚಿಸುತ್ತ ತನ್ನ ಕಲ್ಪನೆಯನ್ನು ಅಭಿವ್ಯಕ್ತಿಸಲು ವಿಭಿನ್ನ ಮಾರ್ಗವನ್ನು ಕಂಡುಕೊಳ್ಳುತ್ತಿದ್ದಾನೆ.
ಮ್ಯಾಜಿಕ್ ಕಲೆಯ ಸಾಗರ ಈ ಸಾಗರ್...!
ಮ್ಯಾಜಿಕ್ ನೊಂದಿಗೆ ಕೆಲವು ಅಪಾಯಕಾರಿ ಸ್ಟಂಟ್ ಗಳನ್ನು ಮಾಡುವ ಸಾಗರ್ ಗೆ ಮನೆಯೇ ಮೊದಲ ಪ್ರಯೋಗ ಶಾಲೆ. ಚಾಪರ್ ಬ್ಲೇಡ್ ನ ಹರಿತವಾದ ಭಾಗದ ಮೇಲೆ ನಡೆದಾಡುವ ಸಾಗರ್, ಪ್ರೇಕ್ಷಕರನ್ನು ನಿಬ್ಬೆರಗಾಗುವಂತೆ ಮಾಡುವುದಲ್ಲದೆ...
ಶಿಕ್ಷಣ ವ್ಯವಸ್ಥೆಗೇ ಸವಾಲೆಸೆಯುತ್ತಿರುವ ಸ್ವರೂಪ
ಚಿತ್ರಕಲೆ ಮೂಲಕ ಸಾಧಾರಣಾ ವಿದ್ಯಾರ್ಥಿಯೊಬ್ಬ ಹೆಚ್ಚಿನ ಅಂಕ ಪಡೆಯಲು ಸಾಧ್ಯವೇ? ದಡ್ಡನೆಂದು ಬೈದು ಶಾಲೆಯಿಂದ ಹೊರದಬ್ಬಲ್ಪಟ್ಟ ವಿದ್ಯಾರ್ಥಿ ಕೇವಲ 20 ದಿನಗಳ ತರಬೇತಿಯ ಮೂಲಕ ಡಿಸ್ಟಿಂಕ್ಷನ್ ಪಡೆಯಲು ಸಾಧ್ಯವೇ? ಡ್ಯಾನ್ಸ್ ಮಾಡಿ ಗಣಿತ-ವಿಜ್ಞಾನದಲ್ಲಿ...ವಿಶೇಷ
ಕುಟುಂಬವೆಂಬ ವಟವೃಕ್ಷದ ಕೆಳಗೆ...
ಮೇ 15 ವಿಶ್ವ ಅಂತರರಾಷ್ಟ್ರೀಯ ಕುಟುಂಬ ದಿನ, ಸತ್ಸಂಪ್ರದಾಯದಲ್ಲಿ ವಿಶ್ವಕ್ಕೆ ಮಾದರಿಯಾದ ಭಾರತದ ಕುಟುಂಬ ಪದ್ಧತಿಯಲ್ಲಿ ಆತಂಕಕಾರಿಯಲ್ಲದಿದ್ದರೂ ಅಲ್ಪಪ್ರಮಾಣದ ಪಾಶ್ಚಾತ್ಯರ ಅನುಕರಣೆಯಾಗುತ್ತಿರುವುದು ಅಸಹನೀಯವೇ.
ಇತಿಹಾಸದ ಕಥೆ ಹೇಳುತ್ತಿದೆ ಮಡಿಕೇರಿ ಅರಮನೆ
ಕೊಡಗಿನ ಮುಖ್ಯ ಪಟ್ಟಣ ಮಡಿಕೇರಿಗೆ ಆಗಮಿಸುವ ಪ್ರವಾಸಿಗರನ್ನು ಎತ್ತರದ ಸಮತಟ್ಟಾದ ಸ್ಥಳದಲ್ಲಿ ಕಲ್ಲುಕೋಟೆ ನಡುವೆ ನೆಲೆನಿಂತ ಅರಮನೆ ಗಮನಸೆಳೆಯುತ್ತದೆ. ಈ ಅರಮನೆ ಮೈಸೂರು ಅರಮನೆಯಂತೆ ವಿಶ್ವವಿಖ್ಯಾತಿ ಪಡೆಯದಿರಬಹುದು.
ಸ್ತ್ರೀಯರ ಮಹತ್ವದ ದಿನ ಅಕ್ಷಯ ತೃತೀಯಾ....
ಅಕ್ಷಯ ತದಿಗೆ ಸ್ತ್ರೀಯರಿಗೆ ಮಹತ್ವದ್ದಾಗಿದೆ. ಸ್ತ್ರೀಯರು ಚೈತ್ರದಲ್ಲಿ ಕೂರಿಸಿದ ಚೈತ್ರ ಗೌರಿಯನ್ನು ಈ ದಿನ ವಿಸರ್ಜನೆ ಮಾಡುತ್ತಾರೆ. ಇದರ ಪ್ರಯುಕ್ತ ಅರಿಶಿನ-ಕುಂಕುಮ ನೀಡುವ ಕಾರ್ಯಕ್ರಮವನ್ನೂ ಮಾಡುತ್ತಾರೆ.
ಒಂದುವರೆ ತಿಂಗಳಲ್ಲಿ ಸೌದಿಯಿಂದ 56,700 ಮಂದಿ ಭಾರತೀಯರ ಗಡಿಪಾರು
ಹೊಸದಿಲ್ಲಿ: ಸುಮಾರು 56,700 ಮಂದಿ ಭಾರತೀಯರನ್ನು ಸೌದಿ ಅರೇಬಿಯಾ ಮುಂದಿನ ಒಂದುವರೆ ತಿಂಗಳಲ್ಲಿ ಗಡಿಪಾರು ಮಾಡಲಿದೆ ಮತ್ತು ಇವರೆಲ್ಲರಿಗೆ ಎಮರ್ಜೆನ್ಸಿ ಸರ್ಟಿಫಿಕೇಟ್ ನೀಡಲು ಹತ್ತು ಅಧಿಕಾರಿಗಳನ್ನು ಸೌದಿಗೆ...
ಜನಸಂಖ್ಯೆಯಲ್ಲಿ ಕರ್ನಾಟಕಕ್ಕೆ 9ನೇ ಸ್ಥಾನ
ಬೆಂಗಳೂರು: ದೇಶದಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕ್ಕೆ 9ನೇ ಸ್ಥಾನದಲ್ಲಿದೆ. ಇದು 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ 6,10,95,297 ಜನರಿದ್ದು, 2001ರ ಜನಗಣತಿಗೆ ಹೋಲಿಸಿದರೆ...
ಬೆಂಗಳೂರಿನ ಐಐಎಂ-ಬಿಗೆ ಹುಸಿ ಬಾಂಬ್ ಕರೆ
ಬೆಂಗಳೂರು: ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೆಜ್ ಮೆಂಟ್ ಬೆಂಗಳೂರು(ಐಐಎಂ-ಬಿ) ಗೆ ಬಾಂಬ್ ಕರೆ ಬಂದಿದ್ದು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಿ ಶೋಧಿಸಿದಾಗ ಇದು ಹುಸಿ ಕರೆಯೆಂದು ತಿಳಿದುಬಂದಿದೆ.
ಎಪಿಎಲ್ -ಬಿಪಿಎಲ್ ಕಾರ್ಡ್ ದಾರರೇ ಅಕ್ಕಿ ಸಿಗೋದು ಫುಲ್ ಡೌಟು!
ಬೆಂಗಳೂರು: ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ದಾರರೇ ಹುಷಾರ್..! ಮುಂದಿನ ತಿಂಗಳು ನಿಮಗೆ ಅಕ್ಕಿ ಸಿಗುವುದು ಬಹುತೇಕ ಅನುಮಾನ ಕಾರಣ ರಾಜ್ಯದ ಗೋದಾಮಿನಲ್ಲಿ ಇರುವ ಅಕ್ಕಿಗೆ ನುಸಿಬಾಧೆ ತಗುಲಿದ್ದು..
ಮಂಗಳೂರು ಮೂಲದ ಬಾಲಕನಿಗೆ ನ್ಯಾಶನಲ್ ಜಿಯೋಗ್ರಾಫಿಕ್ ಬೀ ಪ್ರಶಸ್ತಿ
ವಾಷಿಂಗ್ಟನ್: ಮಂಗಳೂರು ಮೂಲದ ಬಾಲಕನೊಬ್ಬ ಅಮೆರಿಕಾದಲ್ಲಿ ನಡೆದ ನ್ಯಾಶನಲ್ ಜಿಯೋಗ್ರಾಪಿಕ್ ಬೀ 2013 ಸ್ಪರ್ಧೆಯನ್ನು ಗೆದ್ದುಕೊಂಡಿದ್ದಾನೆ. ಏಶ್ಯಾದ ಬೆಟ್ಟ ಪ್ರದೇಶ ಬೊತ್ಸವಾನಾದಲ್ಲಿರುವ ಹುಲಿಗಳ ಬಗ್ಗೆ ಮತ್ತು ಇಂಗ್ಲೆಂಡ್ ನ...
ಮಾಸಾಂತ್ಯಕ್ಕೆ ರಾಜ್ಯಕ್ಕೆ ಮುಂಗಾರು ಪ್ರವೇಶ!
ಬೆಂಗಳೂರು: ಮೇ ತಿಂಗಳ ಕೊನೆಯ ವಾರದಲ್ಲೇ ರಾಜ್ಯಕ್ಕೆ ಮುಂಗಾರು ಪ್ರವೇಶಿಸುವ ಸಾಧ್ಯತೆಗಳಿವೆ ದಟ್ಟವಾಗಿದೆ ಎಂದು ಹವಾಮಾನ ಇಲಾಖೆಯ ನಿರ್ದೇಶಕ ಪುಟ್ಟಣ್ಣ ಹೇಳಿದ್ದಾರೆ.
ರಾಜ್ಯದಲ್ಲಿ ಈ ಶೈಕ್ಷಣಿಕ ವರ್ಷದಿಂದ ಬಂಗಾಳಿ ದ್ವಿತೀಯ ಭಾಷೆ
ಬೆಂಗಳೂರು: ಕರ್ನಾಟಕದಲ್ಲಿ ಬಂಗಾಳಿ ಭಾಷೆಯನ್ನು ಈ ಶೈಕ್ಷಣಿಕ ವರ್ಷದಿಂದ ದ್ವಿತೀಯ ಭಾಷೆಯನ್ನಾಗಿ ಮಾಡಲು ಸರ್ಕಾರ ಆದೇಶ ಹೊರಡಿಸಿದೆ. ಬಂಗಾಳಿ ಸಮುದಾಯದವರು ದೀರ್ಘ ಸಮಯದಿಂದ ಈ ಬಗ್ಗೆ ಮನವಿ...
ಅನಂತಮೂರ್ತಿ ಹಿಂದಿಕ್ಕಿ ಬೂಕರ್ ಪಡೆದ ಅಮೆರಿಕಾದ ಲೇಖಕಿ
ಲಂಡನ್: ಕರ್ನಾಟಕದ ಸಾಹಿತಿ ಯು. ಆರ್. ಅನಂತಮೂರ್ತಿ ಅವರು 2013ರ ಬೂಕರ್ ಅಂತಾರಾಷ್ಟ್ರೀಯ ಪ್ರಶಸ್ತಿಯಿಂದ ಕೂದಲೆಳೆಯ ಅಂತರದಲ್ಲಿ ವಂಚಿತರಾಗಿದ್ದಾರೆ. ಅನಂತಮೂರ್ತಿ ಅವರನ್ನು ಹಿಂದಿಕ್ಕಿದ ಅಮೆರಿಕಾದ ಲೇಖಕಿ ಲೈಡಿಯಾ
ಬಿಸಿಸಿಐ ಅಧ್ಯಕ್ಷನ ಅಳಿಯನೂ ಸ್ಪಾಟ್ ಫಿಕ್ಸಿಂಗ್ ನಲ್ಲಿ ಭಾಗಿ?
ಮುಂಬಯಿ: ಸ್ಪಾಟ್ ಫಿಕ್ಸಿಂಗ್ ನ ನೀರು ಬಿಸಿಸಿಐ ಕಾಲಬುಡಕ್ಕೆ ಬಂದಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗುರುನಾಥ್ ಮೆಯಪ್ಪನ್ ಅವರನ್ನು ಪೊಲೀಸರು ವಿಚಾರಣೆ ನಡೆಸಲಿದ್ದಾರೆ.
ನಾನು ಮುಗ್ದ, ಯಾವುದೇ ತಪ್ಪು ಮಾಡಿಲ್ಲ: ಶ್ರೀಶಾಂತ್
ಹೊಸದಿಲ್ಲಿ: ನಾನು ಮುಗ್ದ ಮತ್ತು ಯಾವುದೇ ತಪ್ಪನ್ನು ಮಾಡಿಲ್ಲ. ನಾನು ಸ್ಪಾಟ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿಲ್ಲ ಎಂದು ಐಪಿಎಲ್ ಸ್ಪಾಟ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿರುವ ಆರೋಪವನ್ನು ಎದುರಿಸುತ್ತಿರುವ ರಾಜಸ್ಥಾನ್ ರಾಯಲ್ಸ್ ತಂಡ...
ಫನೀಶ್ ಮೂರ್ತಿ ಮೇಲೆ ಲೈಂಗಿಕ ಕಿರುಕುಳ ಆರೋಪ: ಕೋರ್ಟ್ ಹೊರಗಡೆ ಇತ್ಯರ್ಥ
ಹೊಸದಿಲ್ಲಿ: ಸಹ ಉದ್ಯೋಗಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪವನ್ನು ಎದುರಿಸುತ್ತಿರುವ ಐಗೇಟ್ ನ ಮಾಜಿ ಸಿಇಒ ಫನೀಶ್ ಮೂರ್ತಿ ತನ್ನ ಮೇಲಿನ ಪ್ರಕರಣವನ್ನು ಕೋರ್ಟ್ ನ ಹೊರಗಡೆಯೇ ಬಗೆಹರಿಸುವ
ಸಂಜಯ್ ದತ್ ಪುಣೆಯ ಯೆರವಾಡ ಜೈಲಿಗೆ
ಮುಂಬಯಿ: 1993ರ ಸರಣಿ ಸ್ಫೋಟ ಪ್ರಕರಣದಲ್ಲಿ ಅಪರಾಧಿಯಾಗಿರುವ ಬಾಲಿವುಡ್ ನಟ ಸಂಜಯ್ ದತ್ ನ್ನು ಪುಣೆಯ ಯೆರವಾಡ ಜೈಲಿಗೆ ಸ್ಥಳಾಂತರಿಸಲಾಗಿದೆ. ಮೇ 16ರಂದು ದತ್ ವಿಶೇಷ ಟಾಡಾ ಕೋರ್ಟ್ ಮುಂದೆ ಶರಣಾಗಿದ್ದರು.
ಚೆನ್ನೈ ಪೊಲೀಸರ ದಾಳಿ: 6 ಮಂದಿ ಬುಕ್ಕಿಗಳ ಸೆರೆ
ಚೆನ್ನೈ: ಸ್ಪಾಟ್ ಫಿಕ್ಸಿಂಗ್ ಆರೋಪದ ಮೇಲೆ ರಾಜಸ್ಥಾನ ರಾಯಲ್ಸ್ ನ ಮೂರು ಮಂದಿ ಆಟಗಾರರು ಸಿಕ್ಕಿಬಿದ್ದ ಮರುದಿನ ಚೆನ್ನೈ ಪೊಲೀಸರು 10 ಕಡೆಗಳಲ್ಲಿ ದಾಳಿ ಮಾಡಿ 6 ಮಂದಿ ಬುಕ್ಕಿಗಳನ್ನು ಬಂಧಿಸಿದ್ದಾರೆ.
ದೆಹಲಿಯಲ್ಲಿ ವೈದ್ಯನಿಂದ ರೋಗಿಯ ಅತ್ಯಾಚಾರ
ಹೊಸದಿಲ್ಲಿ: ದೆಹಲಿಯ ಸರ್ಕಾರಿ ಆಸ್ಪತ್ರೆಯ 51ರ ಹರೆಯದ ವೈದ್ಯ ತನ್ನ ಕ್ಲಿನಿಕ್ ನಲ್ಲಿ 21ರ ಹರೆಯದ ರೋಗಿಯೊಬ್ಬಳನ್ನು ಅತ್ಯಾಚಾರ ಮಾಡಿದ ಪ್ರಕರಣ ನಡೆದಿದೆ. ದೆಹಲಿಯ ಜಗ್ ಪ್ರವೇಶ್ ಚಂದ್ರ ಆಸ್ಪತ್ರೆಯಲ್ಲಿ
ದೆಹಲಿಯಲ್ಲಿ 12ನೇ ತರಗತಿ ಬಾಲಕಿಯ ಗುಂಡಿಕ್ಕಿ ಹತ್ಯೆ
ಹೊಸದಿಲ್ಲಿ: ದಕ್ಷಿಣ ದೆಹಲಿಯಲ್ಲಿ 12ನೇ ತರಗತಿಯಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿನಿಯೊಬ್ಬಳನ್ನು ಹುಡುಗನೊಬ್ಬ ಗುಂಡು ಹಾರಿಸಿ ಕೊಂದ ಘಟನೆ ನಡೆದಿದೆ. ಮುನಿಕ್ರಾ ಪ್ರದೇಶದ ಬುಧ ವಿಹಾರ್ ಪ್ರದೇಶದಲ್ಲಿರುವ
ಬಿಜೆಪಿ ನಾಯಕನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು
ಮುಂಬಯಿ: ಮಹಾರಾಷ್ಟ್ರದ ಬಿಜೆಪಿಯ ಎಂಎಲ್ ಸಿ ಮಧು ಚೌವಾಣ್ ತನ್ನ ಪಕ್ಷದ ಮಾಜಿ ಕಾರ್ಯಕರ್ತೆಯನ್ನು ಅತ್ಯಾಚಾರ ಮಾಡಿದ ಆರೋಪವನ್ನು ಎದುರಿಸುತ್ತಿದ್ದಾರೆ.
ಮಧು ಚೌವಾಣ್ ವಿರುದ್ಧ ಮುಂಬಯಿ ಪೊಲೀಸರು
ಹಲ್ಲೆಗೊಳಗಾಗಿದ್ದ ಪಾಕ್ ಕೈದಿ ಸಾವು
ಚಂಡೀಗಡ: ಜಮ್ಮು ಜೈಲಿನಲ್ಲಿ ಕಳೆದ ವಾರ ಸಹ ಕೈದಿಗಳಿಂದ ಹಲ್ಲೆಗೊಳಗಾಗಿದ್ದ ಪಾಕಿಸ್ತಾನದ ಕೈದಿ ಸಾನುಲ್ಲಾ ರಂಜಾಯ್ ಗುರುವಾರ ಬೆಳಗ್ಗೆ ಮೃತಪಟ್ಟಿದ್ದಾನೆ.
ಹತ್ಯೆ ಪ್ರಕರಣ: ತಲ್ವಾರ್ ದಂಪತಿ ಹೇಳಿಕೆ ದಾಖಲಿಸಲು ಕೋರ್ಟ್ ಆದೇಶ
ಘಜಿಯಾಬಾದ್: ಆರುಷಿ-ಹೇಮರಾಜ್ ಹತ್ಯಾ ಪ್ರಕರಣದಲ್ಲಿ ಮಂಗಳವಾರ ಸಿಬಿಐ ವಿಶೇಷ ನ್ಯಾಯಾಲಯವು ರಾಜೇಶ್ ಮತ್ತು ನುಪುರ್ ತಲ್ವಾರ್ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಿದೆ.
ಅತ್ಯಾಚಾರ ಪ್ರಕರಣ: ವೈದ್ಯಕೀಯ ವಿದ್ಯಾರ್ಥಿನಿ ದೇಹದ ಮೇಲಿತ್ತು ಕಚ್ಚಿದ ಗುರುತು!
ಹೊಸದಿಲ್ಲಿ: ಕಳೆದ ವರ್ಷ ಡಿಸೆಂಬರ್ ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ವೈದ್ಯಕೀಯ ವಿದ್ಯಾರ್ಥಿನಿಯನ್ನು ಇಬ್ಬರು ಕಚ್ಚಿದ ಗುರುತುಗಳಿದ್ದವು ಎಂದು ಹೇಳಲಾಗಿದೆ. ಈ ಎರಡು ಗುರುತುಗಳು
ಬಾಲಿವುಡ್ ನಿರ್ಮಾಪಕಿ ಏಕ್ತಾ ಕಪೂರ್ ಮನೆ, ಕಚೇರಿಗೆ ಐಟಿ ದಾಳಿ
ಮುಂಬಯಿ: ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಮಂಗಳವಾರ ಬಾಲಿವುಡ್ ನಿರ್ಮಾಪಕಿ ಏಕ್ತಾ ಕಪೂರ್ ಮನೆ ಹಾಗೂ ಕಚೇರಿಗೆ ದಾಳಿ ಮಾಡಿದ್ದಾರೆ. ಕಿರುತೆರೆಯಲ್ಲಿ ತನ್ನ ಧಾರಾವಾಹಿಗಳಿಂದ ಹೆಚ್ಚಿನ ಪ್ರಚಾರವನ್ನು ಪಡೆದುಕೊಂಡಿರುವ

Write Your Comment Here...